Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿನಾಯಕನ ಸನ್ನಿಧಿಯಲ್ಲಿ ಪ್ರೊಡಕ್ಷನ್ ನಂ. ೧ ಚಿತ್ರಕ್ಕೆ ಮೂಹೂರ್ತ
Posted date: 21 Thu, Jun 2012 ? 09:20:59 AM

ಶ್ರೀ ವೀರಭದ್ರೇಶ್ವರ ಸ್ವಾಮಿ ಮೂವಿ ಮೇಕರ‍್ಸ್ ಲಾಂಛನದಲ್ಲಿ ಬಿ.ಹೆಚ್. ಸುನಂದ ನಿರ್ಮಿಸುತ್ತಿರುವ, ಜಿ. ಉಮೇಶ್ ನಿರ್ದೇಶನದ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ. ೧ ಎಂಬ ಹೊಸ ಚಿತ್ರವೊಂದರ ಮುಹೂರ್ತ ಕಳೆದ ವಾರ ನಾಗರಭಾವಿಯ ಗುಡ್ಡದ ಗಣಪತಿ ದೇವಸ್ಥಾನದಲ್ಲಿ ನಡೆಯಿತು.  ನಿರ್ಮಾಪಕ ಎ. ಗಣೇಶ್ ಕ್ಲಾಪ್ ಮಾಡಿದರೆ, ನಟ ತಬಲಾನಾಣಿ ಕ್ಯಾಮರಾ ಚಾಲನೆ ಮಾಡಿದರು.  ಆನಂದ್ ಪಿ.ರಾಜು ಸೇರಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಜಿ. ಉಮೇಶ್ ಅವರೇ ಈ ಚಿತ್ರದ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ಧಾರೆ.  ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡಿರುವ ಈ ಹೊಸ ಚಿತ್ರದ ಚಿತ್ರೀಕರಣ ಜೂನ ೨೫ ರಿಂದ ಮೈಸೂರು ಸುತ್ತಮುತ್ತ ನಡೆಯಲಿದೆ.  

    ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ, ಉಮೇಶ್ ಛಾಯಾಗ್ರಹಣ, ತಬಲಾನಾಣಿ ಸಂಭಾಷನೆ, ಶೇಖರ್ ಕಥೆ, ವೆಂಕಟೇಶ್ ಸಾಹಸ, ಬಸವರಾಜ್, ರವೀಶ್ ಸಾಹಿತ್ಯ, ಪರಶುರಾಮ್ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಹಾಯ್ ಕೃಷ್ಣ ಚಿತ್ರದಲ್ಲಿ ನಟಿಸಿದ್ದ ಕೃಷ್ಣ ಈ ಚಿತ್ರದ ನಾಯಕ.  ತಬಲಾನಾಣಿ, ಸತ್ಯಜಿತ್, ಮೈಸೂರು ರಮಾನಂದ್, ಬೀರಾದಾರ್ ಇನ್ನು ಮೊದಲಾದವರಿದ್ದಾರೆ.  


Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿನಾಯಕನ ಸನ್ನಿಧಿಯಲ್ಲಿ ಪ್ರೊಡಕ್ಷನ್ ನಂ. ೧ ಚಿತ್ರಕ್ಕೆ ಮೂಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.